ಎಡಮಂಗಲ : ವ್ಯಕ್ತಿ ಕಾಣೆ – ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲು

0

ಎಡಮಂಗಲ ಗ್ರಾಮದ ಪಾದೆ ಬಾಲಕೃಷ್ಣ ಗೌಡ (56) ಎಂಬವರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ.


ಜುಲೈ 31ರಂದು ಮನೆಯಿಂದ ಹೊರಗೆ ಹೋದ ಅವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅವರ ಪುತ್ರ ದೂರು ನೀಡಿದ್ದಾರೆ. 5.7 ಎತ್ತರದ ಬಾಲಕೃಷ್ಣ ಗೌಡರವರು ಎಣ್ಣೆ ಕಪ್ಪು ಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ, ತಮಿಳು, ಮಲೆಯಾಳಂ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ಎಡ ಕೈಯಲ್ಲಿ ಅಯ್ಯಪ್ಪ ದೇವರ ಹಚ್ಚೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾರಿಗಾದರೂ ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ 9380330564 (ಯತೀಶ್) ನಂಬರ್ ಗೆ,ಅಥವಾ ಬೆಳ್ಳಾರೆ ಪೊಲೀಸ್ ಠಾಣೆಗೆ ತಿಳಿಸಲು ಅವರು ವಿನಂತಿಸಿದ್ದಾರೆ.