ಕಾರ್ಯತೋಡಿ ಸೂರ್ತಿಲ ಅಂಗನವಾಡಿ ಕೇಂದ್ರ ದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಆಟಿ ಉತ್ಸವ

0

ಕಾರ್ಯತೋಡಿ ಸೂರ್ತಿಲ ಅಂಗನವಾಡಿ ಕೇಂದ್ರ ದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಆಟಿ ಉತ್ಸವ ನಡೆಯಿತು.ಧ್ವಜಾರೋಹಣವನ್ನು ರಕ್ತೇಶ್ವರಿ ಕ್ಷೇತ್ರ ಸೂರ್ತಿಲ ಕಾರ್ಯತೋಡಿ ಸೇವಾ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಪಿ.ನೇರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶ್ರುತಿ ಮಂಜುನಾಥ್ ವಹಿಸಿದ್ದರು. ಶ್ರೀಮತಿ ಹೇಮಾ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮಿತ್ರ ಬಳಗ ಕಾರ್ಯತೋಡಿ ಅಧ್ಯಕ್ಷ ಕೀರ್ತಿ ರಾಜ್,ಶ್ರೀಮತಿ ಲತಾ ಟೀಚರ್,ತೀರ್ಥರಾಮ ಕಾಯರ್ತೋಡಿ ಮೊದಲಾ ದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಲತಾ ಟೀಚರ್ ವಂದನಾರ್ಪಣೆಗೈದರು.ನಂತರ ನಡೆದ ಆಟಿ ಉತ್ಸವದಲ್ಲಿ ವಿವಿಧ ಆಟೋಟ ಸ್ಪರ್ಧೆ ಗಳು ನಡೆದು ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.ಆಟಿ ಉತ್ಸವದ ಪ್ರಯುಕ್ತ ಖಾದ್ಯ ತಿಂಡಿಗಳ ವ್ಯವಸ್ಥೆ ಮಾಡಲಾಯಿತು.ನಂತರ ಸಭೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.ಇದರ ಪ್ರಯೋಜಕರಾಗಿ ಶ್ರೀನಿಧಿ ಮಹಿಳಾ ಮಂಡಲ,ಮಿತ್ರ ಬಳಗ ಕಾರ್ಯತೋಡಿ,ಶಶಿಧರ ಶೆಟ್ಟಿ.ಪಿ.,ಪ್ರಿಯಾ ಬಳ್ಳಡ್ಕ,ಶ್ರುತಿ ಮಂಜುನಾಥ್,ಪ್ರಶಾಂತ್ ಆಚಾರ್ಯ ಕಾಯರ್ತೋಡಿ,ಅರ್ಪಿತಾ ಅನಿಲ್ ಸಿಹಿತಿಂಡಿ ನೀಡಿ ಸಹಕರಿಸಿದರು.