ಸುಬ್ರಹ್ಮಣ್ಯ: 53 ನೇ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ೫೩ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ವಿನ್ಯಾಸ್ ಹೊಸೋಳಿಕೆ, ನಿತೀನ್ ಭಟ್, ಸುಹಾಸ್ ಎಚ್.ಎಲ್, ಗುರುಪ್ರಸಾದ್ ಆದಿ ನೇಮಕಗೊಂಡರು. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು ರಾಜೇಶ್ ಎನ್.ಎಸ್ ಸಂಚಾಲಕರಾಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಶ್ರೀಕುಮಾರ್ ಬಿಲದ್ವಾರ ಪ್ರಧಾನ ಕಾರ್ಯದರ್ಶಿ, ರತ್ನಾಕರ ಸುಬ್ರಹ್ಮಣ್ಯ ಕಾರ್ಯದರ್ಶಿ, ಶ್ರೀಕೃಷ್ಣ ಶರ್ಮ ಪ್ರಧಾನ ಕೋಶಾಧಿಕಾರಿ, ಪ್ರಕಾಶ್ ಸುಬ್ರಹ್ಮಣ್ಯ ಕೋಶಾಧಿಕಾರಿ, ಶೇಖರ್ ಸುಬ್ರಹ್ಮಣ್ಯ, ಜಯರಾಮ ಎಚ್.ಎಲ್ಜತೆಕಾರ್ಯದರ್ಶಿಳಾಗಿ ಆಯ್ಕೆ ಮಾಡಲಾಯಿತು, ಅಚ್ಚುತ್ತ ಗೌಡ, ಗಣೇಶ್ ಕಾಶಿಕಟ್ಟೆ ಸಹಾಯಕ ಕೋಶಾಧಿಕಾರಿ ನೇಮಕಗೊಂಡರು. ಉಳಿದಂತೆ ವಿವಿಧ ಸಮಿತಿಗಳ ಸಂಚಾಲಕರುಗಳ ನೇಮಕ ಮಾಡಲಾಗಿದ್ದು ನಿರಂಜನ ಭಟ್, ಸೂರ್ಯ ಭಟ್ ವೈದಿಕ ಸಮಿತಿ, ಉಮೇಶ್ ಕೆ.ಎನ್, ಲೋಕೇಶ್ ಬಿ.ಎನ್ ಕ್ರೀಡಾ ಸಮಿತಿ, ಪಪ್ಪು ಲೋಕೇಶ್,ದೀಪಕ್ ನಂಬಿಯಾರ್ ಅದೃಷ್ಠಚೀಟಿ ಸಮಿತಿ, ರಾಜೇಶ್ ಎನ್.ಎಸ್ ಸಾಂಸ್ಕೃತಿಕ ಸಮಿತಿ, ರವಿ ಕಕ್ಕೆಪದವು ಶೋಭಾಯಾತ್ರೆ ಸಮಿತಿ, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್ ಆರ್ಥಿಕ ಸಮಿತಿ, ಪ್ರಶಾಂತ್ ಆಚಾರ್ಯ,ಸುಕೇಶ್ ಸುದಿ ಆಹಾರ ಸಮಿತಿ, ಯಶೋಧಕೃಷ್ಣ ನೂಚಿಲ, ಪ್ರಶಾಂತ್ ಮೂಜೂರು ಅಲಂಕಾರ ಸಮಿತಿ ಸಂಚಾಲಕರಾಗಿ ಆಯ್ಕೆಯಾದರು. ಅಲ್ಲದೆ ಸಮಿತಿ ಸದಸ್ಯರುಗಳಾಗಿ ಹಲವರನ್ನು ನೇಮಿಸಲಾಯಿತು.