ಸೌಜನ್ಯಳ ಸಾವಿಗೆ ನ್ಯಾಯ ಸಿಗಲೆಂದು ಶಬರಿಮಲೆಯಲ್ಲಿ ಅಯ್ಯಪ್ಪವೃತಧಾರಿಗಳಿಂದ‌ ಪ್ರಾರ್ಥನೆ

0

ಅಡ್ಪಂಗಾಯ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ಆ. 21ರಂದು ಶಬರಿಮಲೆ ಯಾತ್ರೆ ಮಾಡಿದ ಅಯ್ಯಪ್ಪ ವೃತಧಾರಿಗಳು
ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಸೌಜನ್ಯಳ ಸಾವಿಗೆ ನ್ಯಾಯ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು.

ಕ್ಷೇತ್ರದ ಧರ್ಮದರ್ಶಿ ಹಾಗೂ
ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ ಮತ್ತು ಸುಬ್ರಹ್ಮಣ್ಯದ ಉದ್ಯಮಿ ಡಾ. ರವಿಕಕ್ಕೆಪದವು ಪ್ರಾರ್ಥನೆ ಸಲ್ಲಿಸಿದರು. ಅನ್ಯಾಯ ಮಾಡಿದ ಅಪರಾಧಿಗಳು ಬರುವ ಸಂಕ್ರಮಣದೊಳಗೆ ಯಾರು ಅಂತ ಗೊತ್ತಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆಗಬಾರದು ಎಂಬ ನಿಟ್ಟಿನಲ್ಲಿ ವಿಶೇಷ ಪ್ರಾರ್ಥನೆ ಮಾಡಿರುವುದಾಗಿ ತಿಳಿದುಬಂದಿದೆ. ಇವರೊಂದಿಗೆ ಇತರ ಅಯ್ಯಪ್ಪ ಮಾಲಾಧಾರಿಗಳೂ ಉಪಸ್ಥಿತರಿದ್ದರು.