ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಎಳೆದೊಯ್ದ ಕೆ.ಎಸ್.ಆರ್.ಟಿ.ಸಿ. ಬಸ್

0

ಅರಂತೋಡಿನಲ್ಲಿ ನಡೆದ ಘಟನೆ

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯೋರ್ವ ಬಸ್ಸಿಗೆ ಓಡಿಹೋಗಿ ಹತ್ತುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದ ಹಾಗೂ ವಿದ್ಯಾರ್ಥಿಯನ್ನು ಬಸ್ಸು ಸುಮಾರು 50 ಮೀಟರ್ ನಷ್ಟು ದೂರ ಎಳೆದೊಯ್ದ ಘಟನೆ ನಡೆದಿದೆ.

ಸುಳ್ಯದಿಂದ ಕೊಯ್ನಾಡು ಹೋಗುತ್ತಿದ್ದ ಸರ್ಕಾರಿ ಬಸ್ಸು ಕಾಲೇಜು ಬಳಿ ವಿದ್ಯಾರ್ಥಿಗಳನ್ನು ಹತ್ತಿಸಲು ಅಲ್ಪಸಮಯ ನಿಂತಿದ್ದು ವಿದ್ಯಾರ್ಥಿಗಳು ಹತ್ತಿದ ಬಳಿಕ ಬಸ್ಸು ಮುಂದಕ್ಕೆ ಸಾಗಿದ್ದು ಈ ಸಂದರ್ಭದಲ್ಲಿ ಹತ್ತನೇ ತರಗತಿಯ ಅನಸ್ ಎಂಬ ವಿದ್ಯಾರ್ಥಿ ಓಡಿ ಬಂದು ಬಸ್ ಹತ್ತುವ ಸಂದರ್ಭ ವಿದ್ಯಾರ್ಥಿ ಆಯತಪ್ಪಿ ಬಿದ್ದನೆನ್ನಲಾಗಿದೆ. ಒಂದು ಕೈಯಿಂದ ಬಸ್ಸಿನ ರಾಡನ್ನು ಹಿಡಿದು ಕಾಲುಗಳು ನೆಲಕ್ಕೆ ತಾಗಿಕೊಂಡು ಸುಮಾರು 50 ಮೀಟರ್ ಹೋದ ಬಳಿಕ ಚಾಲಕನಿಗೆ ವಿಷಯ ತಿಳಿದು ಬಸ್ಸನ್ನು ನಿಲ್ಲಿಸಿದರೆಂದು ತಿಳಿದು ಬಂದಿದೆ.

ಘಟನೆಯನ್ನು ತಿಳಿದ ಸುಳ್ಯ ಪೊಲೀಸರು ಕಾಲೇಜಿಗೆ ಹೋಗಿ ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.