ಸುಳ್ಯ ಭಾರತೀಯ ಜನತಾ ಪಾರ್ಟಿಯ ಪ್ರಮುಖ ರಿಂದ ಚಂದ್ರಯಾನ- 3 ಯಶಸ್ವಿಗೆ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ

0

ಸುಳ್ಯ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಚಂದ್ರಯಾನ 3 ರ ಯಶಸ್ವಿಗಾಗಿ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಬೇಕು ಮತ್ತು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮವು ಸಾರ್ಥಕವಾಗಬೇಕು ಎಂಬ ನಿಟ್ಟಿನಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಬಿಜೆಪಿ ಪ್ರಮುಖರಿಂದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಭೋದ್ ಶೆಟ್ಟಿ ಮೇನಾಲ, ವಿನಯ್ ಕುಮಾರ್ ಕಂದಡ್ಕ, ಕೃಪಾಶಂಕರ ತುದಿಯಡ್ಕ, ,ಸುನಿಲ್ ಕೇರ್ಪಳ, ಚನಿಯ ಕಲ್ತಡ್ಕ, ಗಿರೀಶ್ ಕಲ್ಲುಗದ್ದೆ, ಸುಧಾಕರ ಕುರುಂಜಿಭಾಗ್ , ಬೂಡು ರಾಧಾಕೃಷ್ಣ ರೈ, ರಂಜಿತ್ ಎನ್. ಆರ್, ರಾಜೇಶ್ ಮೇನಾಲ, ಮಧುರಾ ಭಟ್ ಮತ್ತಿತರರು ಉಪಸ್ಥಿತರಿದ್ದರು.