ಬೆಳ್ಳಾರೆಯಲ್ಲಿ ನೂತನವಾಗಿ ನಿರ್ಮಾಣವಾದ ವಸಂತ ಆರ್ಕೇಡ್ ನ ಉದ್ಘಾಟನೆ

0

ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾದ ವಸಂತ ಆರ್ಕೇಡ್ ನ ಉದ್ಘಾಟನೆ ಹಾಗೂ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ಸ್ ಆ.24 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ವಸಂತ ಆರ್ಕೇಡನ್ನು ಕುಲ ಪುರೋಹಿತರಾದ ಶಿವಪ್ರಸಾದ್ ಭಟ್ ಚೂಂತಾರು ಉದ್ಘಾಟಿಸಿ ಶುಭಹಾರೈಸಿದರು.
ಧನ್ವಂತರಿ ಕ್ಲಿನಿಕನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಉದ್ಘಾಟಿಸಿದರು.
ಧನ್ವಂತರಿ ಮೆಡಿಕಲ್ಸ್ ನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರರವರು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ರೈ ಚಾವಡಿಬಾಗಿಲು ಉಪಸ್ಥಿತರಿದ್ದರು.
ಕು.ತನ್ವಿ ಪ್ರಾರ್ಥಿಸಿ, ಶ್ರೀಮತಿ ಸ್ವಾತಿ ಸ್ವಾಗತಿಸಿದರು.

ಅರವಿಂದ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿ,ಡಾ.ಕಾರ್ತಿಕ್ ರವರು ವಂದಿಸಿದರು.

ಶ್ರೀಮತಿ ವಸಂತಿ ಮತ್ತು ಎಂ.ಸುಬ್ರಹ್ಮಣ್ಯ ಭಟ್,ಶ್ರೀಮತಿ ಅಕ್ಷತಾ ಮತ್ತು ವಿವೇಕ್, ಕು.ಅದಿತಿ,ಮಾ.ಅಕ್ಷಯ್ ,ಕು.ಶ್ವೇತಾ ಹಾಗೂ ಹಲವು ಜನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.