ಸವಣೂರು ವಿದ್ಯಾರಶ್ಮಿಯಲ್ಲಿ ರಕ್ಷಕ-ಶಿಕ್ಷಕ ಸಂಘ ರಚನೆ

0


ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ಪೋಷಕರ ಸಭೆಯಲ್ಲಿ
2023-24 ನೆ ಸಾಲಿನ ರಕ್ಷಕ-ಶಿಕ್ಷಕ ಸಂಘವನ್ನು ರಚಿಸಲಾಯಿತು.

ಶಾಲಾ ಸಂಚಾಲಕರಾದ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಹಾಲಿ ಉಪಾಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು ಅವರು ಗೌರವ ಉಪಾಧ್ಯಕ್ಷರಾಗಿ, ರಾಮ್‌ಪ್ರಸಾದ್ ರೈ ಕಲಾಯಿ (ಪ್ರೌಢಶಾಲಾ ವಿಭಾಗ) ನೂತನ ಉಪಾಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ಅಬ್ದುಲ್ಲಾ ಸೋಂಪಾಡಿ (ಪಿಯುಸಿ ವಿಭಾಗ), ಶ್ರೀಮತಿ ಮಣಿ ಎಂ. ರೈ (ಪ್ರಾಥಮಿಕ ವಿಭಾಗ), ರಫೀಕ್ ಎಂ.ಎ. (ಪ್ರಾಥಮಿಕ ವಿಭಾಗ), ದಿನೇಶ್ ಕೆ. ಶೆಟ್ಟಿ (ಕೆ.ಜಿ. ವಿಭಾಗ) ಮತ್ತು ಶ್ರೀಮತಿ ನಿಶಾ ದಿನೇಶ್ ಶೆಟ್ಟಿ (ಕೆ.ಜಿ. ವಿಭಾಗ) ಆಯ್ಕೆಯಾದರು.