ಸುರೇಶ್ ಉಜಿರಡ್ಕ ಯು.ಟಿ. ಖಾದರ್ ಭೇಟಿ

0

ಊರಿನ ಅಭಿವೃದ್ಧಿ ಕಾಮಗಾರಿಗಳಿಗೆ ಮನವಿ

ಕರ್ನಾಟಕ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರನ್ನು ನಾಲ್ಕೂರಿನ ಉಜಿರಡ್ಕ ಕೊರಗಜ್ಜ ಸಾನಿದ್ಯದ ಆಡಳ್ತೆದಾರ ಸುರೇಶ್ ಉಜಿರಡ್ಕ ಭೇಟಿಯಾಗಿ ಊರಿನ ಅಭಿವೃದ್ದಿ ಕಾಮಗಾರಿಗಳಿಗಾಗಿ ಮನವಿ ಮಾಡಿದರು. ಬಳಿಕ ಬಳಿಕ ಯು.ಟಿ ಖಾದರ್ ಅವರನ್ನು ಹೂಗುಚ್ಚ ನೀಡಿ ಶಾಲು ಹಾಕಿ ಗೌರವಿಸಲಾಯಿತು.

ಈ ಹಿಂದೆ ಚುನಾವಣಾ ಸಂದರ್ಭ ಉಜಿರಡ್ಕ ಕ್ಷೇತ್ರದಲ್ಲಿ ಯು.ಟಿ ಖಾದರ್ ಪರವಾಗಿ ಹರಕೆಯೊಂದನ್ನು ಹೇಳಿಕೊಂಡಿದ್ದರು. ಸುರೇಶ್ ಅವರ ಭೇಟಿ ಸಂದರ್ಭ ಈ ಬಗ್ಗೆ ಚರ್ಚಿಸಲಾಗಿದೆ.