ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ವರ್ಗಾವಣೆ

0

ಸುಬ್ರಹ್ಮಣ್ಯಕ್ಕೆ ವಿಮಲ್ ಬಾಬು

ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವ ರಾಘವೇಂದ್ರ ಹೆಚ್.ಪಿ. ಯವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.

ರಾಜ್ಯದಲ್ಲಿ 147 ಮಂದಿ ವಲಯಾರಣ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರರನ್ನು ಸಕಲೇಶಪುರ ವಲಯಾರಣ್ಯಾಧಿಕಾರಿ ಸಂಶೋಧನಾ ಘಟಕಕ್ಕೆ ಹಾಗೂ ಪುತ್ತೂರು ವಲಯಾರಣ್ಯಾಧಿಕಾರಿ ಯಾಗಿರುವ ಸುಳ್ಯ ಅರಂತೋಡಿನ ಕಿರಣ್ ಬಿ.ಎಂ. ರನ್ನು ಶಿವಮೊಗ್ಗ ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆ ಮಾಡಲಾಗಿದೆ.

ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ಸೋಮವಾರಪೇಟೆ ವನ್ಯಜೀವಿ ವಲಯದಲ್ಲಿರುವ ವಿಮಲ್ ಬಾಬು ಆರ್ ರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.