ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂದ್ರಯಾನ 3ರ ಯಶಸ್ವಿ ಗೆ ಶೇಷಪೂಜೆ

0

ಚಂದ್ರಯಾನ -3ರಲ್ಲಿ ಕಾರ್ಯನಿರ್ವಹಿಸಿದ ಮಾನಸ ಜಯಕುಮಾರ್ ಅವರಿಗೆ ಗೌರವ

ಇಸ್ರೋ ಸಂಸ್ಥೆಯು ಚಂದ್ರಯಾನ 3 ನ್ನು ಯಶಸ್ವಿಗೊಳಿಸಿ ಅಭೂತಪೂರ್ವ ಇತಿಹಾಸ ನಿರ್ಮಿಸಿ ದೇಶದ ಹೆಸರನ್ನು ಜಗತ್ತಿನ ಮೂಲೆಮೂಲೆಗೂ ಪಸರಿಸಿದ ಚಂದ್ರಯಾನ 3ರಲ್ಲಿ ಕಾರ್ಯನಿರ್ವಹಿಸಿದ ಸಂಶೋಧನಾ ವಿದ್ಯಾರ್ಥಿ ಮಾನಸ ಜಯಕುಮಾರ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕುಟುಂಬ ಸಹಿತ ಭೇಟಿ ನೀಡಿ ದೇವರಿಗೆ ಕೃತಜ್ಞತಾ ಪೂರ್ವಕವಾಗಿ ಶೇಷ ಪೂಜೆಯನ್ನು ನೆರವೇರಿದರು.

ಚಂದ್ರಯಾನ 3 ರಲ್ಲಿ ಭಾಗಿಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮಾನಸ ಜಯಕುಮಾರ್ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಲಾಯಿತು. ಮತ್ತು ಐ.ಎಸ್.ಆರ್.ಒ ಮುಖ್ಯಸ್ಥರಿಗೆ ದೇವಾಲಯದ ವತಿಯಿಂದ ಅಭಿನಂದನಾ ಪತ್ರ ಹಾಗು ಪ್ರಸಾದ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಟ್ರಸ್ಟಿ ಶೋಭಾ ಗಿರಿಧರ್,ಮಾಸ್ಟರ್ ಪ್ಲಾನ್ ಸಮಿತಿಯ ಮನೋಜ್ ಕುಕ್ಕೆ ಉಪಸ್ಥಿತರಿದ್ದರು.