ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ‌ಹಬ್ಬದ ಸ್ಮರಣ ಸಂಚಿಕೆ ” ಬೆಳ್ಳಿ ಬರಹ ” ಲೋಕಾರ್ಪಣೆ

0

ಒಗ್ಗಟ್ಟು ಮತ್ತು‌ ನಂಬಿಕೆಯಿಂದ ಸುಳ್ಯದ ಮಾಧ್ಯಮ ಕ್ಷೇತ್ರ ಬೆಳಗಿದೆ : ಡಾ.ಉಜ್ವಲ್ ಯು.ಜೆ.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ‌ ಹಬ್ಬ ಸಮಾರಂಭದಲ್ಲಿ ಹೊರ ತರಲಾದ ” ಬೆಳ್ಳಿ ಬರಹ ” ಸ್ಮರಣ ಸಂಚಿಕೆಯ‌ ಲೋಕಾರ್ಪಣೆ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಉಜ್ವಲ್ ಯು.ಜೆ. ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿ “ಒಗ್ಗಟ್ಟು ಮತ್ತು‌ ನಂಬಿಕೆಯಿಂದ ಸುಳ್ಯದ ಮಾಧ್ಯಮ ಕ್ಷೇತ್ರ ಬೆಳಗಿದೆ” ಎಂದು‌ ಹೇಳಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಪ್ರೆಸ್ ‌ಕ್ಲಬ್ ಅಧ್ಯಕ್ಷ ‌ಹರೀಶ್‌ ಬಂಟ್ವಾಳ್, ಪ್ರೆಸ್ ಕ್ಲಬ್ ನಿರ್ದೇಶಕ ಯಶ್ವಿತ್ ಕಾಳಮನೆ ಮುಖ್ಯ ಅತಿಥಿಗಳಾಗಿದ್ದರು.

ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್ ಕೆರೆ ವೇದಿಕೆಯಲ್ಲಿದ್ದರು.

ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಜೆ.ಕೆ. ರೈ‌ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ಸ್ವಾಗತಿಸಿದರು. ಕೋಶಾಧಿಕಾರಿ ದಯಾನಂದ ಕಲ್ನಾರ್ ವಂದಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ‌ನಿರೂಪಿಸಿದರು.