ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -ರಜತ ಸಂಭ್ರಮ

0


🔸 ಐವತ್ತೊಕ್ಲು ಗ್ರಾಮ ಸಮಿತಿಯ ಪೂರ್ವಭಾವಿ ಸಭೆ


ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಸಂಭ್ರಮ ಸೆ.19 ರಿಂದ ಸೆ.21 ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಈ ಬಗ್ಗೆ ಐವತ್ತೊಕ್ಲು ಗ್ರಾಮ ಸಮಿತಿಯ ಪೂರ್ವಭಾವಿ ಸಭೆಯು ಐವತ್ತೊಕ್ಲು ಗ್ರಾಮ ಸಮಿತಿಯ ಸಂಚಾಲಕರು ಆಗಿರುವ ನಾಗಮಣಿ ಕೆದಿಲ ರವರ ನೇತೃತ್ವದಲ್ಲಿ ಪಂಜ ಮುಡೂರು ಇನ್ ಫೋಟೆಕ್ ನಲ್ಲಿ ನಡೆಯಿತು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು, ಆರಾಧನಾ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಆರ್ಥಿಕ ಸಮಿತಿಯ ಸಂಚಾಲಕ ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ ಹಾಗೂ ಪೂರ್ವಾಧ್ಯಕ್ಷ ನೇಮಿರಾಜ ಪಲ್ಲೋಡಿ ಮತ್ತು ಐವತ್ತೊಕ್ಲು ಗ್ರಾಮದ ಸಹ ಸಂಚಾಲಕರು ಉಪಸ್ಥಿತರಿದ್ದರು.