ಅರಂತೋಡು: ಅಡ್ತಲೆ ದಿ. ಜಯರಾಮ ಮಾಸ್ತರ್ ವೈಕುಂಠ ಸಮಾರಾಧನೆ – ನುಡಿನಮನ ಸಲ್ಲಿಕೆ

0

ಅರಂತೋಡು ಗ್ರಾಮದ ಅಡ್ತಲೆ ನಿವೃತ್ತ ಶಿಕ್ಷಕ ದಿ. ಜಯರಾಮ ಮಾಸ್ತರ್ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಸೆ.3ರಂದು ಅಡ್ತಲೆ ಮನೆಯಲ್ಲಿ ಜರುಗಿತು.

ಭವಾನಿಶಂಕರ ಅಡ್ತಲೆ ಅವರು ದಿ. ಜಯರಾಮ ಮಾಸ್ತರ್ ಅವರ ಕುರಿತು ಮಾತನಾಡಿ , ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಯಶೋದಾ ಅಡ್ತಲೆ, ಪುತ್ರರಾದ ಪ್ರದೀಪ್ ಅಡ್ತಲೆ, ಸಂದೀಪ್ ಅಡ್ತಲೆ, ಪುತ್ರಿ ದೀಪಿಕಾ ಅಡ್ತಲೆ, ಹಾಗೂ ಕುಟುಂಬಸ್ಥರು, ಹಿತೈಷಿಗಳು, ಊರವರು ಉಪಸ್ಥಿತರಿದ್ದು, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.