ಬಾಂಜಿಕೋಡಿ:ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಜನಾ ಕಾರ್ಯಕ್ರಮ

0

ಐವರ್ನಾಡು ಗ್ರಾಮದ ಬಾಂಜಿಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶ್ರೀ ಶಿವಭಕ್ತವೃಂದ ಭಜನಾ ತಂಡ ಬಾಂಜಿಕೋಡಿ ಇದರ ಸದಸ್ಯರುಗಳು ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಭಜನಾ ಸಂಕೀರ್ತನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೀಪ, ಸಹ ಶಿಕ್ಷಕಿ ಶ್ರೀಮತಿ ಲತಾ ಭಾಸ್ಕರ್, ಸಹಾಯಕಿ ಶ್ರೀಮತಿ ಕುಸುಮಾವತಿ ಖಂಡಿಗೆಮೂಲೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ,

ಸಹಾಯಕಿ ಕುಮಾರಿ, ಬಾಂಜಿಕೋಡಿ ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿ ಮಕ್ಕಳು, ಮತ್ತು ಊರಿನವರಾದ ಪುಟ್ಟಣ್ಣ ಗೌಡ ಕಣಿಪ್ಪಿಲ, ಶ್ರೀಮತಿ ಕಮಲ ತಿಮ್ಮಪ್ಪ ಗೌಡ ಬಾಂಜಿಕೋಡಿ ಉಪಸ್ಥಿತರಿದ್ದರು.