ಸೆ.10: ಆಲೆಟ್ಟಿಯಲ್ಲಿ ಪ್ರಥಮ ವರುಷದ ಮೊಸರು ಕುಡಿಕೆ ಉತ್ಸವ -ಶೋಭಾಯಾತ್ರೆ

0

ಆಲೆಟ್ಟಿ ವ್ಯಾಪ್ತಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರಥಮ ವರುಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವ ಹಾಗೂ ಶೋಭಾಯಾತ್ರೆ ಯು ಸೆ.10 ರಂದು ನಡೆಯಲಿರುವುದು.

ಅಪರಾಹ್ನ ಗಂಟೆ 3.00 ಕ್ಕೆ ನಾರ್ಕೋಡು ಶ್ರೀ ಸದಾಶಿವ ದೇವಸ್ಥಾನದ ಮಹಾದ್ವಾರದ ಬಳಿ ಮೊಸರು ಕುಡಿಕೆ ಉತ್ಸವದ ಶೋಭ ಯಾತ್ರೆಗೆ ಪ್ರಗತಿಪರ ಕೃಷಿಕ ಉದಯ ಕುಡೆಕಲ್ಲು ರವರು ಚಾಲನೆ ನೀಡಲಿದ್ದಾರೆ.
ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಯು ಯುವಕರ ತಂಡ ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಪ್ರದರ್ಶನ ದೊಂದಿಗೆ ಆಲೆಟ್ಟಿ ದೇವಳದ ವಠಾರಕ್ಕೆ ಸಾಗಿ ಬರಲಿರುವುದು.
ಸಂಜೆ ಗಂಟೆ 6 ಕ್ಕೆ ಆಲೆಟ್ಟಿ ಸಿ.ಎ ಬ್ಯಾಂಕಿನ ಸಭಾಂಗಣದಲ್ಲಿ ಧಾರ್ಮಿಕ ಸಭೆಯು ನಡೆಯಲಿರುವುದು.

ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ ಅಧ್ಯಕ್ಷತೆವಹಿಸಲಿರುವರು. ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ಗಿರೀಶ್ ನಾರ್ಕೋಡು ದೀಪ ಪ್ರಜ್ವಲಿಸಲಿರುವರು. ಬಜರಂಗದಳದ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀನಾಥ್ಆಲೆಟ್ಟಿ,
ಧನಂಜಯ ಕುಂಚಡ್ಕ, ಜಗದೀಶ್ ಕಾಪುಮಲೆ, ಸೀತಾರಾಮಕೊಲ್ಲರಮೂಲೆ ಭಾಗವಹಿಸಲಿದ್ದಾರೆ.