ಪುತ್ತೂರು ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿ ನೇಮಕ

0

ಪಿಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ರಾಥೋಡ್ ವರ್ಗಾವಣೆ ಆಗಿದ್ದು, ಅವರಿದ್ದ ಜಾಗಕ್ಕೆ ಆಂಜನೇಯ ರೆಡ್ಡಿ ರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಆಂಜನೇಯ ರೆಡ್ಡಿ ರವರು ಈ ಮೊದಲು ಕಡಬ, ಉಪ್ಪಿನಂಗಡಿ, ಬೆಳ್ಳಾರೆ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ತಮ್ಮ ದಕ್ಷ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.