ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯದಲ್ಲಿ ವತಿಯಿಂದ ಬಾಲಗೋಕುಲ ಪ್ರಶಿಕ್ಷಣ ವರ್ಗ

0

ನಿವೇದಿತಾ ‌ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)
ಇದರ ವತಿಯಿಂದ‌ ಬಾಲಗೋಕುಲ ಪ್ರಶಿಕ್ಷಣ ವರ್ಗ ಸುಳ್ಯದ ಅಮೃತ ಭವನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ದಲ್ಲಿ ತಾಲೂಕಿನ ಶಿಕ್ಷಕಿಯರು, ಬಾಲಗೋಕುಲ ಈಗಾಗಲೇ ನಡೆಸುತ್ತಿರುವ ವರು, ಜನಪ್ರತಿನಿಧಿಗಳು ಭಾಗವಹಿಸಿದರು.

ಬಾಲಗೋಕುಲ ಪ್ರಶಿಕ್ಷಣ ವರ್ಗವನ್ನು ಜಿಲ್ಲಾ ಪ್ರಮುಖ ರಾದ ವಸಂತ ಕಾಟಿಪಳ್ಳ ನಡೆಸಿಕೊಟ್ಟರು. ವೇದಿಕೆಯಲ್ಲಿ ಟ್ರಸ್ಟ್ ನ ಅದ್ಯಕ್ಷ ರಾದ‌ ಇಂದಿರಾ ರಾಜಶೇಖರ್ ಉಪಸ್ಥಿತರಿದ್ದರು. ಮಾತಾಜಿಯರಾದ ರೋಹಿಣಿ ಎಲಿಮಲೆ, ವಿದ್ಯಾಲಕ್ಮಿ ಪುತ್ತೂರು , ವಿಮಲ ಸವಣೂರು ಬಾಲಗೋಕುಲ ನಡೆಸುವ ರೀತಿ ತಿಳಿಸಿಕೊಟ್ಟರು.

ಈ ಸಂದಭ೯ದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯದರ್ಶಿ ಗುಣವತಿ‌ ಕೊಲ್ಲಂತಡ್ಕ, ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು.ವಶಾರದ .ಡಿ.ಶೆಟ್ಟಿ ವಂದಿಸಿದರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.