ಯುಗನ್ ಜೇನುಕೋಡಿಗೆ ಕರಾಟೆಯಲ್ಲಿ ಬಹುಮಾನ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಏನೆಕಲ್ಲಿನ ಯುಗನ್ ಜೇನು ಕೋಡಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಕರಾಟೆ ಶಿಕ್ಷಕ ದಿನೇಶ್ ಮುರುಳ್ಯ ರವರ ಶಿಷ್ಯ ಕುಮಾರಸ್ವಾಮಿ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ. ಏನೆಕಲ್ಲಿನ ಮೋಹಿತ್ ಜೇನುಕೋಡಿ ಮತ್ತು ಭವ್ಯ ದಂಪತಿಗಳ ಪುತ್ರ.