ಜಾಲ್ಸೂರು: ಕದಿಕಡ್ಕದಲ್ಲಿ ಮನೆ ಬಾಗಿಲು ಮುರಿದು ಹಾಡುಹಗಲೇ ಕಳವು

0

ಹಿಂಬದಿ ಬಾಗಿಲಿನ ಲಾಕ್ ಮುರಿದು ಗೋಡ್ರೇಜ್ ಒಳಗಿದ್ದ ಚಿನ್ನ ಹಾಗೂ ನಗದು ದೋಚಿ ಪರಾರಿಯಾದ ಕಳ್ಳರು

ಹಾಡುಹಗಲೇ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಸೆ.12ರಂದು ಮಧ್ಯಾಹ್ನ ವರದಿಯಾಗಿದೆ.

ಕದಿಕಡ್ಕದ ವಸಂತ ರೈ ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದು, ವಸಂತ ಅವರ ಪತ್ನಿ ಹಾಗೂ ಮಕ್ಕಳು ಕೆಲಸದ ನಿಮಿತ್ತ ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ತೆರಳಿದ್ದರು. ಮಧ್ಯಾಹ್ನ 12.30ರ ವೇಳೆಗೆ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಮನೆಯ ಹಿಂಬದಿಯಿಂದ ಬಾಗಿಲು ಮುರಿದಿದ್ದು, ಮನೆಯ ಒಳಗೆ ಎರಡು ಗೋಡ್ರೆಜ್ ನ ಲಾಕ್ ಮುರಿದಿದ್ದು, ಒಳಗಿದ್ದ ವಸಂತ ರೈ ಅವರ ಪತ್ನಿಯ ಕರಿಮಣಿ, ಚಿನ್ನದ ಸರ ಹಾಗೂ ಎರಡು ಉಂಗುರ ಹಾಗೂ ಗೋಡ್ರೆಜ್ ಒಳಗಿದ್ದ ಹದಿಮೂರು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.