ವಿ.ಆರ್.ಡಿ.ಎಫ್ ಜಾಲ್ಸೂರು ಸಮಿತಿ ಸದಸ್ಯರ ಕೃಷಿ ಅಧ್ಯಯನ ಪ್ರವಾಸ

0

ಬೆಳ್ತಂಗಡಿಯ ಕಡಮ್ಮಾಜೆ ಮತ್ತು ಮೂಡಬಿದ್ರೆಯ ಸೋನ್ಸ್ ಫಾರ್ಮ್ ಗೆ ಭೇಟಿ

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ), ಮಂಗಳೂರು ಇದರಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮಾಭಿವೃದ್ಧಿ ಜಾಲ್ಸುರು ಸಮಿತಿಯ ಸದಸ್ಯರು ಬೆಳ್ತಂಗಡಿ ತಾಲೂಕಿನ ಕಡಮ್ಮಾಜೆ ಫಾರ್ಮ್ ಹಾಗೂ ಮೂಡಬಿದ್ರೆಯ ಸೋನ್ಸ್ ಫಾರ್ಮ್ ಗೆ ಸೆ.14 ರಂದು ಭೇಟಿ ನೀಡಿದರು.

ಕಡಮ್ಮಾಜೆ ಫಾರ್ಮ್ ನಲ್ಲಿ ವಿವಿಧ ತಳಿಯ ಮೀನುಗಳು, ಕೋಳಿಗಳು, ಪಕ್ಷಿಗಳು ಹಾಗೂ ಸಾವಯವ ಕೃಷಿ ಬಗ್ಗೆ ಸದಸ್ಯರು ತಿಳಿದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಡಮ್ಮಾಜೆ ಫಾರ್ಮ್ ನ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಮೊಗ್ರು ಮಾಹಿತಿ ನೀಡಿದರು. ದೇವಿಪ್ರಸಾದ್ ಮೊಗ್ರು ಹಾಗೂ ಮನೆಯವರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು.

ಬಳಿಕ ಮೂಡಬಿದಿರೆಯ ಸೋನ್ಸ್ ಫಾರ್ಮ್ ಗೆ ಭೇಟಿ ನೀಡಿದ ಸಮಿತಿಯ ಸದಸ್ಯರು ಅಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡ ಮರಗಳನ್ನು, ವಿವಿಧ ಜಾತಿಯ ಬಿದಿರು ಹಿಂಡುಗಳನ್ನು, ಸಮಗ್ರ ಕೃಷಿಯನ್ನು ವೀಕ್ಷಿಸಿದರು. ಫಾರ್ಮ್ ಮಾಲಕ ವಿನೋದ್ ರವರು ಮಾಹಿತಿ ನೀಡಿದರು. ಸಮಿತಿಯ ವತಿಯಿಂದ ಅವರನ್ನು ಗೌರವಿಸಲಾಯಿತು.

ಕೃಷಿ ಅಧ್ಯಯನ ಪ್ರವಾಸದಲ್ಲಿ ಸುಮಾರು 20 ಮಂದಿ ಸದಸ್ಯರು ಭಾಗವಹಿಸಿದ್ದರು.