ಯಶವಂತ ಎ.ಕೆ.ಅಳ್ಪೆ ಚಾಮೆತ್ತಡ್ಕ ನಿಧನ

0

ಐವತ್ತೊಕ್ಲು ಅಳ್ಪೆ ಚಾಮೆತ್ತಡ್ಕ ನಿವೃತ್ತ ಶಿಕ್ಷಕ ದಿ. ಕೆಂಚಪ್ಪಗೌಡರ ಪುತ್ರ ಯಶವಂತ ಎ .ಕೆ.ಅಲ್ಪ ಕಾಲದ ಅಸೌಖ್ಯದಿಂದ ಸೆ.15.ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 58 ವರುಷ ವಯಸ್ಸಾಗಿತ್ತು. ಹಿಂದೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನವೋದಯ ಪ್ರೇರಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ಶ್ರೀಮತಿ ಮಮತಾ ,ಪುತ್ರ ಹವನ್, ಸಹೋದರ ಚಕ್ರಪಾಣಿ, ಹಾಗೂ ಬಂಧು ಮಿತ್ರರು,ಕುಟುಂಬಸ್ಥರನ್ನು ಅಗಲಿದ್ದಾರೆ.