ಸುಬ್ರಹ್ಮಣ್ಯ: ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನಿಂದ ಸಹಾಯಧನ ಹಸ್ತಾಂತರ

0


ಸುಬ್ರಹ್ಮಣ್ಯ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಕಲಚೇತನ, ಯುವ ಪತ್ರಕರ್ತ, ಹವ್ಯಾಸಿ ಬರಹಗಾರ, ಉಲ್ಲಾಸ ಕಜೋಡಿ ಅವರಿಗೆ ಸಹಾಯಧನವನ್ನು ಸೆ.22 ರಂದು ಹಸ್ತಾಂತರಿಸಲಾಯಿತು.

ಹರಿಹರ ಪಲ್ಲತಡ್ಕ ಗ್ರಾಮದ ಕಜ್ಜೋಡಿ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರು ಅವರ ಮನೆಯಲ್ಲಿ ಉಲ್ಲಾಸ ಕಜ್ಜೋಡಿ ಅವರನ್ನು ಭೇಟಿಯಾಗಿ ಟ್ರಸ್ಟ್ ವತಿಯಿಂದ ಗೌರವಿಸಿ ಸಹಾಯಧನವನ್ನು ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ,ಟ್ರಸ್ಟಿನ ನಿರ್ದೇಶಕರುಗಳಾದ ರವೀಂದ್ರ ಕುಮಾರ ರುದ್ರಪಾದ, ಮೋಹನ್ದಾಸ್ ರೈ, ಮಣಿಕಂಠ, ಸಮಾಜ ಸೇವಕಿ ಪುಷ್ಪ, ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಶ್ವನಾಥ ನಡುತೋಟ ,ಹಾಗೂ ಉಲ್ಲಾಸ ಕಜೋಡಿಯವರ ತಂದೆ ಪ್ರಭಾಕರ ಹಾಗೂ ತಾಯಿ ಪ್ರಭಾವತಿ ಉಪಸ್ಥಿತರಿದ್ದರು.