ಜನತಾದರ್ಶನ ಕಾರ್ಯಕ್ರಮದಲ್ಲಿ ನಾಲ್ಕೂರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಮನವಿ

0


ನಿನ್ನೆ ಮಂಗಳೂರಿನಲ್ಲಿ ನಡೆದ ಜನತಾದರ್ಶನ ಸಚಿವರ ಕಾರ್ಯಕ್ರಮದಲ್ಲಿ ನಾಲ್ಕೂರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ದಿನೇಶ್ ಹಾಲೆಮಜಲುರವರು ತಮ್ಮ ನಿಯೋಗದೊಂದಿಗೆ ದಿನೇಶ್ ಗುಂಡೂರಾವ್‌ರವರನ್ನು ಭೇಟಿ ಮಾಡಿ ಪ್ರಮುಖವಾಗಿ ಕಳೆದ ಮಳೆಗಾಲ ಕೊಚ್ಚಿ ಹೋದ ರಸ್ತೆಗಳ ಅಭಿವೃದ್ಧಿ ಹಾಗೂ ತಡೆಗೋಡೆ ಸೇತುವೆ ನಿರ್ಮಾಣದ ಬಗ್ಗೆ ಸಚಿವರಲ್ಲಿ ಮನವಿ ನೀಡಿ ಚರ್ಚಿಸಿದರು.


ಅವರೊಂದಿಗೆ ಮಾಜಿ ಕೆಪಿಸಿಸಿ ಸದಸ್ಯ ಡಾ. ರಘು ಸೇರಿದಂತೆ ಮತ್ತಿತರರು ಜೊತೆಗಿದ್ದರು. ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.