ಅಜ್ಜಾವರ: ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ವಿಖಾಯ ಅಸೆಂಬ್ಲಿ ಕಾರ್ಯಕ್ರಮ

0

ಎಸ್‌.ಕೆ.ಎಸ್.ಎಸ್.ಎಫ್. ಸುಳ್ಯ ವಲಯದ ವಿಖಾಯ ಅಸೆಂಬ್ಲಿ ಕಾರ್ಯಕ್ರಮವು ಅಜ್ಜಾವರದ ನೂರುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ನಡೆಯಿತು.

ಸುಳ್ಯ ವಲಯ ವಿಖಾಯ ಕಾರ್ಯದರ್ಶಿ ಶರೀಫ್ ಸಿ. ಎ.ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್. ಅಜ್ಜಾವರ ಶಾಖಾ ಕಾರ್ಯದರ್ಶಿ ಅಬೂಬಕ್ಕರ್ ಅಝ್ ಅರಿ ಉದ್ಘಾಟಿಸಿದರು.
ಮಹಮ್ಮದ್ ನವವಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಖಾಯ ಮಾಹಿತಿ ಕಾರ್ಯಾಗಾರ ಮತ್ತು ಸದಸ್ಯತ್ವ ನೋಂದಣಿ ನಡೆಸಿದರು.
ವೇದಿಕೆಯಲ್ಲಿ ಅಜ್ಜಾವರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು.
ಸುಳ್ಯ ವಲಯದ ವಿಖಾಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಿದ್ದೀಕ್ ಅಡ್ಕ ಸ್ವಾಗತಿಸಿ, ರಹಿಮಾನ್ ಅಜ್ಜಾವರ ವಂದಿಸಿದರು.