ಶೌರ್ಯ ಜಾಗರಣ ರಥಯಾತ್ರೆಗೆ ಸುಳ್ಯದಲ್ಲಿ ವಿ. ಹೆಚ್.ಪಿಬಜರಂಗದಳ ಕಾಯಕರ್ತರಿಂದ ಭವ್ಯ ಸ್ವಾಗತ

0

ವಿಶ್ವ ಹಿಂದೂ ಪರಿಷತ್ ಇದರ 60 ನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಬಜರಂಗದಳದ ನೇತೃತ್ವದಲ್ಲಿ ದೇಶಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯು ಸಂಚರಿಸುತ್ತಿದ್ದು ಚಿತ್ರದುರ್ಗದಿಂದ ಹೊರಟ ಶೌರ್ಯ ಜಾಗರಣ ರಥಯಾತ್ರೆ ಇಂದು ಸುಳ್ಯಕ್ಕೆ ಆಗಮಿಸಿತು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಕಡಬ ಪ್ರಖಂಡ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.

ಸುಳ್ಯ ಚೆನ್ನಕೇಶವ ದೇವರ ರಥಬೀದಿಯ ಕಟ್ಟೆಯ ಬಳಿಯಿಂದ ಪಾದಯಾತ್ರೆ ದೇವಸ್ಥಾನದ ವರೆಗೆ ಸಾಗಿ ಬಂತು.
ಈ ಸಂದರ್ಭದಲ್ಲಿ ರಥ ಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪುತ್ತೂರು, ವಿ.ಹೆಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಕಡಬ ತಾಲೂಕು ಬಜರಂಗದಳದ ಸಂಚಾಲಕ ರಾಜೇಶ್ ಉದನೆ,ಕಾರ್ಯದರ್ಶಿಗಳಾದ ನವೀನ್ ಎಲಿಮಲೆ, ಜಯಂತ ಕಲ್ಲುಗುಡ್ಡೆ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ರಜತ್ ಅಡ್ಕಾರ್, ರಾಜೇಶ್ ಶೆಟ್ಟಿ ಮೇನಾಲ,ಜಯರಾಮ ರೈ ಜಾಲ್ಸೂರು, ಸುರೇಶ್ ಕಣೆಮರಡ್ಕ,‌ರಾಜೇಶ್ ಕಿರಿಭಾಗ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಹಲವಾರು ಮಂದಿ ಕಾರ್ಯಕರ್ತರು, ದುರ್ಗಾವಾಹಿನಿ ಸದಸ್ಯರು ಉಪಸ್ಥಿತರಿದ್ದರು.