ಎಲಿಮಲೆಯಲ್ಲಿ ವಿ.ಹೆಚ್.ಪಿ.ಭಜರಂಗದಳ ಶೌರ್ಯ ಜಾಗರಣ ರಥಯಾತ್ರೆಗೆ ಸ್ವಾಗತ

0

ವಿಶ್ವ ಹಿಂದೂ ಪರಿಷತ್ ಇದರ ಸ್ಥಾಪನೆಯಾಗಿ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಚರಿಸುವ ಶೌರ್ಯ ಜಾಗರಣ ರಥಯಾತ್ರೆಯನ್ನು ಎಲಿಮಲೆಯಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ಪ್ರಮುಖರಾದ ಸೋಮಶೇಖರ ಪೈಕ, ಹರಿಪ್ರಸಾದ್ ಎಲಿಮಲೆ, ಸಂದೀಪ್ ವಳಲಂಬೆ, ನವೀನ್ ಎಲಿಮಲೆ, ಲತೀಶ್ ಗುಂಡ್ಯ, ಸತೀಶ್ ಗುಡ್ಡನಮನೆ, ಬೋಜಪ್ಪ ಹರ್ಲಡ್ಕ, ಪ್ರಶಾಂತ್ ಅಂಬೆಕಲ್ಲು, ಮಣಿಕಂಠ ಎಲಿಮಲೆ, ಸುನಿಲ್ ಎಲಿಮಲೆ, ನಾಗರಾಜ ಕೇಪ್ಲಕಜೆ, ಸವಿತಾ ಕಾಯಾರ, ಹೇಮಾವತಿ ಚಿತ್ತಡ್ಕ, ದಿವ್ಯ ಬಾಳುಗೋಡು ಉಪಸ್ಥಿತರಿದ್ದರು. ರಥಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಭಜನೆ ಹಾಡುವ ಮೂಲಕ ಸ್ವಾಗತಿಸಲಾಯಿತು.