ಪಲ್ಲೋಡಿ: ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡದ ಸಮಿತಿ ರಚನೆ

0

ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ -ಪಂಜ ಇದರ ಪೂರ್ವಭಾವಿ ಸಭೆಯು ಅ.7 ರಂದು ಪಲ್ಲೋಡಿ ಜ್ಞಾನ ಭಾರತಿ ಶಿಶುಮಂದಿರ ದಲ್ಲಿ ನಡೆಯಿತು. ಇದೇ ವೇಳೆ ಭಜನಾ ತಂಡದ ಸಮಿತಿ ರಚಿಸಲಾಯಿತು.


ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲ.ಕೆ.ಎಸ್ ಪಲ್ಲೋಡಿ, ಉಪಾಧ್ಯಕ್ಷರಾಗಿ ಶ್ರೀಮತಿ ದೀಪಿಕಾ ಪಲ್ಲೋಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯಶ್ರೀ ಪಲ್ಲೋಡಿ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಯಶೋಧ ಅಡ್ಕ,ಕೋಶಾಧ್ಯಕ್ಷರಾಗಿ ಶ್ರೀಮತಿ ನಮಿತ ಪಲ್ಲೋಡಿ, ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಪುತ್ಯ, ಗೌರವ ಸಲಹೆಗಾರರಾಗಿ ಕೆ.ಕೃಷ್ಣ ವೈಲಾಯ, ನೇಮಿರಾಜ್ ಪಲ್ಲೋಡಿ , ಪ್ರಕಾಶ್ ಜಾಕೆ, ಮನು ತೊಂಡಚ್ಚನ್ , ಶಂಕರ ಭಟ್ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಉಳ್ಳಾಕುಲು ಕಲಾರಂಗದ ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.