ಹಳೆಗೇಟು ಸಾಂಸ್ಕೃತಿಕ ಸಂಘದಿಂದಚಾಂದಿನಿ‌ ಚಿಕಿತ್ಸೆಗೆ ಸಹಾಯ

0

ಸುಳ್ಯದ ಹಳೆಗೇಟು ಸಾಂಸ್ಕೃತಿಕ ಸಂಘ ಇದರ ವತಿಯಿಂದ ಕಳೆದ 30 ವರ್ಷಗಳಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಕಾಯಾರ್ತೋಡಿ ನಿವಾಸಿ ಚಾಂದಿನಿ ಇವರ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು.

ಹಾಗೂ ನವಂಬರ್ ತಿಂಗಳು ಸುಳ್ಯದಲ್ಲಿ ನಡೆಯಲಿರುವ ಪ್ರೊ. ಕಬಡ್ಡಿ ಸಹಾಯಾರ್ಥ ಇದರ ಮುಖ್ಯಸ್ಥರಾದ ಸಂಶುದ್ದೀನ್ ಇವರ ಮೂಲಕ ಪಂದ್ಯಾಟಕ್ಕೆ ಧನ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸರಾವ್, ಕಾರ್ಯದರ್ಶಿ ಶಿವನಾಥ್ ರಾವ್, ಖಜಾಂಚಿ ಚಿತ್ತರಂಜನ್ ಹಾಗೂ ಇನ್ನಿತರ ಸದಸ್ಯರುಗಳಾದ ಬಾಲಗೋಪಾಲ ಎಂ., ರಾಕೇಶ್ ಕುಂಟಿಕಾನ, ಸಚಿನ್ ರಾವ್, ಧನಂಜಯ್ ಪಂಡಿತ್, ರಮೇಶ್ ರೈ, ಕಿರಣ್ ನೀರ್ಪಾಡಿ, ರಾಜೇಶ್ ಮತ್ತಿತರರು ಹಾಜರಿದ್ದರು.