ಮಂಗಳೂರಿನಲ್ಲಿ ಜೆ‌.ಕೆ. ಸಿಮೆಂಟ್ ಹಾಗೂ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಸೆಮಿನಾರ್ ಕಾರ್ಯಕ್ರಮ

0

ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜರಿಗೆ ಸನ್ಮಾನ

ಮಂಗಳೂರಿನ ಜೆ.ಕೆ. ಸಿಮೆಂಟ್ ಲಿಮಿಟೆಡ್ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ವತಿಯಿಂದ ತೂಗುಸೇತುವೆಗಳ ಸರದಾರ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರನ್ನು ಅ.10ರಂದು ಸನ್ಮಾನಿಸಿ, ಗೌರವಿಸಲಾಯಿತು.

ಜೆ.ಕೆ. ಸಿಮೆಂಟ್ ಲಿಮಿಟೆಡ್ ಹಾಗೂ ಸಿವಿಲ್ ಇಂಜಿನಿಯರ್ ವತಿಯಿಂದ ಮಂಗಳೂರಿನ ಒಶ್ಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಸೆಮಿನಾರ್ ಕಾರ್ಯಕ್ರಮದಲ್ಲಿ ಡಾ. ಗಿರೀಶ್ ಭಾರದ್ವಾಜ್ ಅವರನ್ನು ಜೆ.ಕೆ. ಸಿಮೆಂಟ್ ಲಿಮಿಟೆಡ್ ಮುಖ್ಯಸ್ಥ ಶಕುನ್ ವೈದ್ಯ, ಪಿ.ಆರ್. ಸೆಲ್ವ ಗಣೇಶ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಎ.ಡಿ., ಸುಳ್ಯದ ಇಂಜಿನಿಯರ್ ಗಳಾದ ದೇವಿಪ್ರಸಾದ್ ಕೆ., ಗಿರೀಶ್ ನಾರ್ಕೋಡು, ರಬೀವ್, ಅಬ್ದುಲ್ ನಾಸೀರ್, ವೈಭವ್ ಕಜೆಗದ್ದೆ, ಭರತ್ ಐವರ್ನಾಡು, ಶರತ್ ಅರಂಬೂರು, ಜೆ.ಕೆ. ಸಿಮೆಂಟ್ ಡೀಲರ್ ಹಾಗೂ ಜಾಲ್ಸೂರಿನ ಮೀರಾ ಎಂಟರ್ ಪ್ರೈಸಸ್ ಮಾಲಕ ಪ್ರಶಾಂತ್ ಮೋಂಟಡ್ಕ ಸೇರಿದಂತೆ ಇಂಜಿನಿಯರಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.