ಅ 14 ರಂದು ದುಬೈಯಲ್ಲಿ ಅನ್ಸಾರಿಯ ಎಜುಕೇಷನ್ ಸೆಂಟರ್ ಸುಳ್ಯ ಇದರ UAE ರಾಷ್ಟ್ರೀಯ ಸಮೀತಿ ಹಾಗು KA21 ಸುಳ್ಯ ವಾಟ್ಸಾಪ್ ಗ್ರೂಪ್ ವತಿಯಿಂದ ಬೃಹತ್ ಮಿಲಾದ್ ಸಮಾವೇಶ

0

ಅನ್ಸಾರಿಯ ಎಜುಕೇಶನ್ ಸೆಂಟರ್ ಸುಳ್ಯ ಇದರ ಯುಎಇ ರಾಷ್ಟ್ರೀಯ ಸಮಿತಿ ಹಾಗೂKA 21ಸುಳ್ಯ ವಾಟ್ಸಪ್ ಗ್ರೂಪ್ ವತಿಯಿಂದ ಬೃಹತ್ ಮಿಲಾದ್ ಸಮಾವೇಶ ಮತ್ತು ಮೌಲೂದ್ ಕಾರ್ಯಕ್ರಮ ದುಬೈ ಖಾಲಿದ್ ಮಸೀದಿ ಹತ್ತಿರ ಕಾಸರಗೋಡು ರೆಸ್ಟೋರೆಂಟ್ ನಲ್ಲಿ ಅ.14 ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಅನ್ಸಾರಿಯ ಅಜ್ಮಾನ್ ಸಮಿತಿ ಅಬ್ದುಲ್‌ ಖಾದರ್ ಸಹದಿ ದುವಾಶಿರ್ವಚನ ಮತ್ತು ಮೌಲೂದ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.


ಅನ್ಸಾರಿಯ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಝೈನುದ್ದೀನ್ ಬೆಳ್ಳಾರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಅನ್ಸಾರಿಯ ಎಜುಕೇಶನ್ ಸೆಂಟರ್ ಕಾರ್ಯದರ್ಶಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಡಾ.ರಿಜ್ವಾನ್ ಸುಳ್ಯ, ಅನ್ಸಾರಿಯ ದುಬೈ ಸಮಿತಿಯ ಹಮೀದ್ ಜಟ್ಟಿಪಳ್ಳ, ಅನ್ಸಾರಿಯ ಅಬುಧಾಬಿ ಸಮಿತಿ ಲತೀಫ್ ನ್ಯಾಷನಲ್, ಅನ್ಸಾರಿಯ ಅಲೈನ್ ಸಮಿತಿಯ ಉಮ್ಮರ್ ಎಸ್,ಅನ್ಸಾರಿಯ ಅಜ್ಮಾನ್ ಸಮಿತಿಯ ಅಬ್ದುಲ್‌ ಅಜೀಜ್,ಅನ್ಸಾರಿಯ ಶಾರ್ಜಾ ಸಮಿತಿಯ ಅಬ್ದುಲ್‌ ನಾಸೀರ್ ಅಲ್ಲದೇ ಅನ್ಸಾರಿಯ ಯುಎಇ ಎಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರೂ ಬಾಗವಹಿಸಲಿದ್ದಾರೆ ಎಂದು ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಜಟ್ಟಿಪಳ್ಳ ತಿಳಿಸಿದ್ದಾರೆ.