ಪೆರುವಾಜೆ ದೇವಸ್ಥಾನದಲ್ಲಿ ಶ್ರೀ ದೇವಿಗೆ ರಥ ಸಮರ್ಪಣೆ ಬಗ್ಗೆ ಪ್ರಶ್ನಾ ಚಿಂತನೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಜಲದುರ್ಗಾದೇವಿಗೆ ರಥ ಸಮರ್ಪಣೆ ಪ್ರಯುಕ್ತ ಪ್ರಶ್ನಾ ಚಿಂತನೆಯು ಅ.13 ರಂದು ಬೆಳಿಗ್ಗೆ ಯಿಂದ ನಡೆಯುತ್ತಿದೆ.


ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಮತ್ತು ಶಿಲ್ಪಿಗಳಾದ ಮಹೇಶ ಮುನಿಯಂಗಳರವರ ಉಪಸ್ಥಿತಿಯಲ್ಲಿ ಶ್ರೀಧರನ್ ಪೆರುಂಬಾಳ ಇವರ ನೇತೃತ್ವದಲ್ಲಿ ನಡೆಯುತ್ತಿದೆ.
ನವಂಬರ್ ತಿಂಗಳಲ್ಲಿ ಶ್ರೀ ದೇವಿಗೆ ರಥ ಸಮರ್ಪಿಸಬೇಕೆಂದು ಸಂಕಲ್ಪಿಸಿದಂತೆ ,ರಥ ಸಮರ್ಪಣೆಯ ಬಗ್ಗೆ ನಡೆಯುವ ಪ್ರಶ್ನಾಚಿಂತನೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದಾರೆ.