ಚಾಮಡ್ಕ ಫಾಲ್ಸ್ ನಲ್ಲಿ ಬಿದ್ದು ಹೋದ ಬೈಕ್ ಕೀ ಹುಡುಕಿಕೊಟ್ಟು ಮಾನವೀಯತೆ ಮೆರೆದ ಅಟೋ ಚಾಲಕರು

0

ಅಮರಮುಡ್ನೂರು ಗ್ರಾಮದ ಚಾಮಡ್ಕ ಫಾಲ್ಸ್ ವೀಕ್ಷಿಸಲು ಹಾಸನ ಮೂಲದಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕರು ನೀರಿನಲ್ಲಿ ಇಳಿಯುವ ಸಂದರ್ಭದಲ್ಲಿ ಬೈಕ್ ಕೀ ಜಲಪಾತದ ನೀರಲ್ಲಿ ಬಿದ್ದು ಹೋಯಿತು.
ವಿಷಯ ತಿಳಿದ ಸ್ಥಳೀಯ ಕುಕ್ಕುಜಡ್ಕದ ಶ್ರೀ ಮಹಾವಿಷ್ಣು ಅಟೋ ಚಾಲಕರು ನೀರಿಗಿಳಿದು ಕೀ ಯನ್ನು ಹುಡುಕಿಕೊಡುವ ಮೂಲಕ ಸಾಹಸ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಕುಕ್ಕುಜಡ್ಕ ಮಹಾವಿಷ್ಣು ಆಟೋ ಚಾಲಕ ಸಂಘದ ಚಾಲಕ ಮಿತ್ರರು ಸಹಕರಿಸಿದರು.