ಅಡ್ಪಂಗಾಯದಲ್ಲಿ ರಕ್ತದಾನ ಶಿಬಿರ : 50ಕ್ಕೂ ಮಿಕ್ಕಿ ರಕ್ತದಾನಿಗಳಿಂದ ರಕ್ತದಾನ

0

ಅಜ್ಜಾವರ ಗ್ರಾಮದ ಅಡ್ಪಂಗಾಯದ ಯೂತ್ ಕಾಂಗ್ರೆಸ್ ಹಾಗೂ ಜಿಲ್ಲಾ ಆಸ್ಪತ್ರೆ ‌ನೇತೃತ್ವದಲ್ಲಿ ಅಡ್ಪಂಗಾಯ ‌ಜಂಕ್ಷನ್ ನಲ್ಲಿ ರಕ್ತದಾನ ಶಿಬಿರ ಅ.15 ರಂದು‌ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ್, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾನಂದ ಮಾವಜಿ, ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ,
ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ,
ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್,
ಜಿಲ್ಲಾ ಆಸ್ಪತ್ರೆಯಾ ಮೆಡಿಕಲ್ ಅಧಿಕಾರಿ ವಿದ್ಯಾಶ್ರೀ,
ಬ್ಲಡ್ ಬ್ಯಾಂಕ್ ಅಧಿಕಾರಿ ಆಂಟಣಿ,
ಬ್ಲಡ್ ಬ್ಯಾಂಕ್ ಕಾರ್ಡಿನೇಟರ್ ಅಶೋಕ್ ಕುಮಾರ್,
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸಂಘಟನ ಕಾರ್ಯದರ್ಶಿ ಕರೀಂ ಕೆದ್ಕಾರ್,
ಸಾಮಾಜಿಕ ಜಾಲತಾಣ ಸಂಯೋಜಕ ಮುಹಮ್ಮದ್ ಜಂಶೀರ್ ಶಾಲೆಕ್ಕಾರ್,
ಅಡ್ಪಂಗಾಯ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರವೀಶ್ ಮಾವಿನಪಲ್ಲ,
ಅಜ್ಜಾವರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್,
ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ಲ ಅಜ್ಜಾವರ,
ಅಜ್ಜಾವರ ಗ್ರಾಮ ಆದಿ ದ್ರಾವಿಡ ಅಧ್ಯಕ್ಷ ಚೋಮ ಕಲ್ತಡ್ಕ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 25ನೇ ಬಾರಿ ರಕ್ತದಾನ ಮಾಡಿದ ಅಜ್ಜಾವರ ಗ್ರಾಮ ಕಾಂಗ್ರೆಸ್ ಸಮಿತಿ ಸಂಘಟನ ಕಾರ್ಯದರ್ಶಿ ಅಬ್ಬಾಸ್ ಎ ಬಿ ಯವರನ್ನು ಗೌರವಿಸಲಾಯಿತು.
ಅಜ್ಜಾವರ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅಡ್ಪಂಗಾಯ ಸ್ವಾಗತಿಸಿದರು.

ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾದ ಶಿಯಾಝ್ ಅಡ್ಕ ವಂದಿಸಿದರು.

ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಸುಹೈಲ್ ಅಡ್ಕ ಹಾಗೂ ಅಬ್ದುಲ್ಲ ಬಯಂಬು ಕಾರ್ಯಕ್ರಮವನ್ನು ನಿರೂಪಿಸಿದರು.