ಆನೆಗುಂಡಿ: ಕಾರುಗಳ ಮಧ್ಯೆ ಅಪಘಾತ

0

ಎರಡು ಕಾರುಗಳ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ, ಜಖಂಗೊಂಡು, ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡ ಘಟನೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ಅ.16ರಂದು ಸಂಜೆ ಸಂಭವಿಸಿದೆ.

ಅಪಘಾತದಲ್ಲಿ ಆಲ್ಟೋ  ಕಾರಿನಲ್ಲಿದ್ದ ಕಾಸರಗೋಡು ಬಂದಡ್ಕ ನಿವಾಸಿಗಳಾದ ಜಾಸ್ಮಿನ್, ಹಕೀಮ್, ಮಹಮ್ಮದ್ ರಫೀಕ್, ಖದೀಜ,  ರೇವತಿ ಇವರುಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು  ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಾಸರಗೋಡು ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದುಬಂದಿದೆ.
ಇವರು ಪುತ್ತೂರಿನಿಂದ ಸುಳ್ಯದತ್ತ ಬರುತ್ತಿದ್ದರು ಎಂದು ತಿಳಿದುಬಂದಿದೆ.