ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಒಳ ನುಗ್ಗಿ ಕಳ್ಳತನ

0

ಸುಳ್ಯ ಜಟ್ಟಿಪಳ್ಳದ ಬೋರುಗುಡ್ಡೆ ಬಳಿ ನಡೆದ ಘಟನೆ

ಸುಳ್ಯ ಸಮೀಪದ ಜಟ್ಟಿಪಳ್ಳ ಬೋರುಗುಡ್ಡೆ ಬಳಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ.


ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನ್ ದಾಸ್ ಮುದ್ಯ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೋಹನ್ ದಾಸ್ ಮತ್ತು ಅವರ ಪತ್ನಿ ಹಾಸನದಲ್ಲಿರುವ ಮಗಳ ಮನೆಗೆ ಹೋಗಿದ್ದರೆಂದು ತಿಳಿದುಬಂದಿದೆ.


ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕೃತ್ಯ ನಡೆದಿದ್ದು, ಸುಮಾರು ೨೦ ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ತಿಳಿದುಬಂದಿದೆ.

ಇಂದು ಸಂಜೆ ಆ ಮನೆಯ ಮಹಡಿಯಲ್ಲಿರುವ ಬಾಡಿಗೆದಾರರು ನೋಡುವಾಗ ಮನೆಯ ಬಾಗಿಲು ಮರಿಯಲ್ಪಟ್ಟಿರುವುದು ಕಂಡು ಬಂತು. ಪೊಲೀಸರಿಗೆ ದೂರು ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಮೋಹನ್ ದಾಸ್ ಮುದ್ಯ ದಂಪತಿ ಹಾಸನದಿಂದ ಹೊರಟು ಸುಳ್ಯಕ್ಕೆ ಬರುತ್ತಿದ್ದಾರೆ.