ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ

0

ಹರಕೆಯ ಸೇವೆ ಪೂರೈಸಿದ ಬಿಹಾರದ ಡಾ.ರಾಹುಲ್ ಕುಮಾರ್ ಪಾಟ್ನಾ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಇಂದು ಸಮರ್ಪಣೆ ಆಗಿರುವುದಾಗಿ ತಿಳಿದು ಬಂದಿದೆ.

ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಪ್ರಭಾವಳಿ ಸಮರ್ಪಿಸಿದ್ದು ಇಂದು ಪೂಜೆ ಸಲ್ಲಿಸಿ ಸಮರ್ಪಿಸಲಾಯಿತು.

ಮದುವೆ ಬಳಿಕ ಸಂತಾನಕ್ಕಾಗಿ ಹೇಳಲಾದ ಹರಕೆ ಸೇವೆ ಇದಾಗಿದ್ದು ಪುತ್ರ ಸಂತಾನ ಆಗಿದ್ದು ಅದರಂತೆ ಹರಕೆ ತೀರಿಸಿರುವುದಾಗಿ ತಿಳಿದು ಬಂದಿದೆ. ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುತ್ರನ ಇರುವಿಕೆಯೊಂದಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ಬ್ರಹ್ಮಾರ್ಪಣೆ ಗೈದರು. ಇದಲ್ಲದೆ ತುಲಾಭಾರ ಸೇವೆಯನ್ನು ಪೂರೈಸಿರುವುದಾಗಿ ತಿಳಿದು ಬಂದಿದೆ.