ಬಾಳುಗೋಡು:ಕ್ರೀಡಾಂಗಣಕ್ಕೆ ಸಹೃದಯಿ ನೆರಳು ಗಿಡ ನೆಡುವ ಕಾರ್ಯಕ್ರಮ

0

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಆಶ್ರಯದಲ್ಲಿ ಊರಿನ ಕ್ರೀಡಾಂಗಣಕ್ಕೆ ಸಹೃದಯಿ ನೆರಳು ಗಿಡ ನೆಡುವ ಕಾರ್ಯಕ್ರಮ ಅ.21 ರಂದು ದಿ.ಕೂಜುಗೋಡು ಕಟ್ಟೆಮನೆ ತಮ್ಮಯ್ಯ ಗೌಡ ಕ್ರೀಡಾಂಗಣ ಬೆಟ್ಟುಮಕ್ಕಿ ಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಯುವಕ ಮಂಡಲದ ಅದ್ಯಕ್ಷರಾದ ರಾಜೇಶ್ ಕಿರಿಭಾಗ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ವಲಯ ಅರಣ್ಯಧಿಕಾರಿಗಳಾದ ವಿಮಲ್ ಬಾಬು ಬಾಗವಹಿಸಿದ್ದರು.
ವೇದಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರಾದ ಲೋಕೇಶ್ ಮುಂಡೋಕಜೆ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನ ಅದ್ಯಕ್ಷರಾದ ವಿಜಯ ಕುಮಾರ್, ಉಪಾದ್ಯಕ್ಷರಾದ ಜಯಂತ ಬಾಳುಗೋಡು, ಬೆಟ್ಟುಮಕ್ಕಿ ಶಿರಾಡಿ ದೈವಸ್ಥಾನದ ಸದಸ್ಯರಾದ ಸಂದೇಶ್‌ ದಿವ್ಯಕಾಂತ ಹಾಗು ವಿಶ್ವ ಯುವಕ ಮಂಡಲದ ಗೌರವದ್ಯಕ್ಷರಾದ ರಾಧಕೃಷ್ಣ ಕಟ್ಟೆಮನೆ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಒಕ್ಕೂಟ, ಬಾಳುಗೋಡು, ಸಂಜೀವಿನಿ ಹಾಗು ಸ್ತ್ರೀಶಕ್ತಿ ಒಕ್ಕೂಟ ಬಾಳುಗೋಡು ಹಾಗು ಊರವರು ಸಹಕರಿಸಿದರು
ಯಶ್ವಿತ ಬಾಳುಗೋಡು ಪ್ರಾರ್ಥಿಸಿ, ಅಜಯ್ ಪೊಯ್ಯಮಜಲು ಸ್ವಾಗತಿಸಿದರು ಡಾ ಸೋಮಶೇಖರ್ ಕಟ್ಟೆಮನೆ ದನ್ಯವಾದಗೈದರು, ಕಾರ್ತಿಕ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.