ದರ್ಖಾಸ್ತು ಶ್ರೀ ಶಾರದಾಂಬಾ ಸೇವಾ ಸಮಿತಿ ವತಿಯಿಂದ ಶ್ರೀ ಶಾರದೋತ್ಸವ , ಸಾಧಕರಿಗೆ ಸನ್ಮಾನ

0

ಸಂಘಟನೆಗಳಿಂದ ಕಾರ್ಯಕ್ರಮ ಯಶಸ್ವಿ – ರಾಜೀವಿ ಆರ್.ರೈ

ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ 18 ನೇ ವರ್ಷದ ಶ್ರೀ ಶಾರದೋತ್ಸವವು ಅ.23 ರಂದು ಪ್ರಾರಂಭಗೊಂಡಿದ್ದು ಅ.24 ರವರೆಗೆ ದರ್ಖಾಸ್ತು ಶಾಲಾ ಅಕ್ಷಯ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಅ.23 ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.


ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ದರ್ಖಾಸ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ,ಸುಬ್ರಹ್ಮಣ್ಯ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ, ಸಂಘದ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ದರ್ಖಾಸ್ತು, ಎಸ್.ಡಿ.ಎಂ.ಸಿ.ಅಧ್ಯಕ್ಷ ಹರೀಶ್ ದರ್ಖಾಸ್ತು, ಮುತ್ತುಮಾರಿಯಮ್ಮ ದೇವಸ್ಥಾನ್ ವ್ಯ.ಸ.ಅಧ್ಯಕ್ಷ ನಟರಾಜ್ ಡಿ.ಆರ್.ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ
ಐವರ್ನಾಡು ರಬ್ಬರು ಅಭಿವೃದ್ದಿ ನಿಗಮದ ನಿವೃತ್ತ ಸೂಪರ್ ವೈಸರ್ ದಾದಪ್ಪ ಪಿ.ಎಸ್., ನಿವೃತ್ತ ಪ್ರಥಮ ದರ್ಜೆ ಸಹಾಯಕ ಶಂಕರಲಿಂಗಂ ರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಗುಣಶ್ರೀ ಮತ್ತು ಶ್ರವಣ್ ಕಲ್ಲೊಣಿ ಸನ್ಮಾನ ಪತ್ರ ವಾಚಿಸಿದರು.
ಶಾರದಾ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ ಸರಸ್ವತಿ ನಲ್ಲೇಂದ್ರನ್ ಮತ್ತು ಮನೆಯವರನ್ನು ಗೌರವಿಸಲಾಯಿತು.
ಹಿರಿಯರಾದ ಮೋನಪ್ಪ ನಾಯ್ಕ ದರ್ಖಾಸ್ತು ರವರನ್ನು ಗೌರವಿಸಲಾಯಿತು.
ಶಾರದೋತ್ಸವ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು.
ಸ್ವಾತಿ ಮತ್ತು ತಂಡದವರು ಪ್ರಾರ್ಥಿಸಿ,ನಾಗೇಶ್ ಚೂಂತಾರು ಸ್ವಾಗತಿಸಿ,ಶ್ರೀಧರ ಚೂಂತಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾ ಕಾರ್ಯಕ್ರಮ ನಡೆದ ಬಳಿಕ ಶ್ರೀ ಶಾರದಾ ದೇವಿಗೆ ಮಹಾಪೂಜೆ ನಡೆಯಿತು.
ನಂತರ ಸಿಂಚನಾ ಆರ್ಕೇಸ್ಟ್ರಾ ಕರ್ನಾಟಕ ಮತ್ತು ಕೇರಳದ ಪ್ರಖ್ಯಾತ ಕಲಾವಿದರಿಂದ ಅದ್ದೂರಿಯ ಸಂಗೀತ ರಸಮಂಜರಿ ನಡೆಯಿತು.
ಅ.24 ರಂದು ಪೂರ್ವಾಹ್ನ ಗಂಟೆ 10.00 ಕ್ಕೆ ಊರಿನವರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಅರಣ್ಯ ಇಲಾಖೆ ರಾಷ್ಟ್ರೀಯ ವಾಲಿಬಾಲ್ ಆಟಗಾರ ಶಂಕರಲಿಂಗಂ ದರ್ಖಾಸ್ತು ಉದ್ಘಾಟಿಸಲಿದ್ದಾರೆ.
ಪುರುಷರಿಗೆ ಹಗ್ಗಜಗ್ಗಾಟ,ಮಡಕೆ ಒಡೆಯುವುದು,ಗೋಣಿಚೀಲ ಓಟ ನಡೆಯಲಿರುವುದು.
ಮಹಿಳೆಯರಿಗೆ ಹಗ್ಗಜಗ್ಗಾಟ,ಮಡಕೆ ಒಡೆಯುವುದು,ಸಂಗೀತ ಕುರ್ಚಿ ನಡೆಯಲಿದೆ.
1ರಿಂದ 7 ನೇ ತರಗತಿ ಮಕ್ಕಳಿಗೆ ಲಿಂಬೆ ಚಮಚ, ಗೋಣಿಚೀಲ ಓಟ,ಕಪ್ಪೆಜಿಗಿತ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ ನಡೆದು ಪುಡ್ಕಜೆ ಹೊಳೆಯಲ್ಲಿ ಜಲಸ್ತಂಭನ ನಡೆಯಲಿರುವುದು ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ದರ್ಖಾಸ್ತು ತಿಳಿಸಿದ್ದಾರೆ.