ಮಾವಿನಕಟ್ಟೆ ಶ್ರೀ ಮಹಾವಿಷ್ಣು ದೈವಸ್ಥಾನದಲ್ಲಿ ಸಾರ್ವಜನಿಕ ಆಯುಧ ಪೂಜಾ ಕಾರ್ಯಕ್ರಮ

0

ಮಾವಿನಕಟ್ಟೆ ಉದಯಗಿರಿಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ ಇದರ ಆಶ್ರಯದಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.23ರಂದು ನಡೆಯಿತು.
ಪೂ.ಗಣಪತಿ ಹವನ, ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ವಾಹನ ಪೂಜೆ‌ ನೆರವೇರಿತು.
ಇದೇ ಸಂದರ್ಭದಲ್ಲಿ ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ನನ್ನು ನಿವೃತ್ತ ಯೋಧರಾದ ವಿಜಯ ಕುಮಾರ್ ಕೊಂಬರಮರವರು ಆಡಳಿತ ಮಂಡಳಿ ಹಾಗೂ ಆಯುಧ ಪೂಜಾ ಸೇವಾ ಸಮಿತಿ‌ ವತಿಯಿಂದ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ, ಸದಸ್ಯರಾದ ಗೋಪಿನಾಥ ಮೆತ್ತಡ್ಕ, ಭಾಸ್ಕರ ಬಾಳೆತೋಟ, ಕೃಷ್ಣಪ್ಪ ಗೌಡ ಕುಚ್ಚಾಳ, ಕೆಬಿಎಸ್ ನಾರಾಯಣ ಮಾಸ್ತರ್, ನಿತ್ಯಾನಂದ ಪಾರೆಪ್ಪಾಡಿ, ಹೊನ್ನಪ್ಪ ಗೌಡ ಕುತ್ಯಾಳ, ಶ್ರೀಕಾಂತ್ ಮಾವಿನಕಟ್ಟೆ, ರಾಮಾಚಂದ್ರ ನಾಗನಗದ್ದೆ, ಲೋಕೇಶ್ ಪೂಜಾರಿ, ನರಸಿಂಹ ಗೌಡ ಮೆತ್ತಡ್ಕ, ರೋಹಿಣಿ ಮಾವಿನಕಟ್ಟೆ ಮೊದಲಾದವರಿದ್ದರು.