ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ – ವಾರ್ಷಿಕ ಮಹಾಸಭೆ

0

ಸುಳ್ಯದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆ ಅ.26 ರಂದು ಸುಳ್ಯದ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.

ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ನೋಟಿಸ್ ಟ್ರಸ್ಟ್ ನ ನಿರ್ದೇಶಕರಾದ ವೀಣಾ ಮೊಂಟೆಡ್ಕ ಓದಿ ದಾಖಲಿಸಿದರು.


ಪ್ರಾಸ್ತಾವಿಕ ಮಾತಿನೊಂದಿಗೆ 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಮಂಡಿಸಿದರು.
2022-23 ನೇ ಸಾಲಿನ ಲೆಕ್ಕ ಪರಿಶೀಲನಾ ವರದಿಯನ್ನು ಟ್ರಸ್ಟ್ ನ ಖಜಾಂಜಿ ಜಯಂತಿ ಅಜ್ಜಾವರ ಮಂಡಿಸಿದರು.

ಟ್ರಸ್ಟ್ ಕಾನೂನು ಮತ್ತು ನಿಯಮ ಇಂಡಿಯನ್ ಟ್ರಸ್ಟ್ ಆಕ್ಟ್ 1882 ಬಗ್ಗೆ ಸುಳ್ಯದ ಲೆಕ್ಕ ಪರಿಶೋಧಕರಾದ ಗಣೇಶ್ ಭಟ್ ಮಾಹಿತಿ ನೀಡಿದರು.

ಟ್ರಸ್ಟ್ ನ ವತಿಯಿಂದ ಮಾಡಲಾಗಿರುವ ಬಟ್ಟೆ ಕೈ ಚೀಲವನ್ನು ಗಣೇಶ್ ಭಟ್ ಬಿಡುಗಡೆಗೊಳಿಸಿದರು.

” ನಮ್ಮ ಮನೆ ಹಸಿರು ಮನೆ” ಪ್ರಕೃತಿ ರಕ್ಷಣೆಯ ಪ್ರತಿಜ್ಞೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಇತ್ತೀಚಿಗೆ ಕೇಂದ್ರಸರಕಾರ ಜಾರಿಗೊಳಿಸಿದ ವಿಧೇಯಕ 33% ಮಹಿಳಾ ಮೀಸಲಾತಿಯನ್ನು ಸ್ವಾಗತಿಸಲಾಯಿತು. ಟ್ರಸ್ಟ್ ನ ಮೂಲಕ ಕೇಂದ್ರಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ವೇದಿಕೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶಶಿಕಲಾ ಹರಪ್ರಸಾದ್ ಉಪಸ್ಥಿತರಿದ್ದರು.
ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಪುಷ್ಪಾಮೇದಪ್ಪ ಪ್ರಾರ್ಥಿಸಿದರು.
ಟ್ರಸ್ಟ್ ನ ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ ಸ್ವಾಗತಿಸಿದರು.
ಟ್ರಸ್ಟ್ ನ ನಿರ್ದೇಶಕರಾದ ಸವಿತಾ ಕಾಯಾರ ಧನ್ಯವಾದ ಸಮರ್ಪಿಸಿದರು.

ಟ್ರಸ್ಟ್ ನ ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.