ಎನ್. ವೆಂಕಟ್ರಮಣ ಭಟ್ ನೆಟ್ಟಾರು ನಿಧನ

0

ಬೆಳ್ಳಾರೆ ಗ್ರಾಮದ ನೆಟ್ಟಾರು ಎನ್. ವೆಂಕಟ್ರಮಣ ಭಟ್ ಅ. 28ರಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಬೆಳ್ಳಾರೆಯ ಶ್ರೀ ಸದಾಶಿವ ಚಾರಿಟಬಲ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದ ಮತ್ತು ಪ್ರಗತಿಪರ ಕೃಷಿಕರಾಗಿದ್ದ ವೆಂಕಟ್ರಮಣ ಭಟ್ಟರು ಬೆಳ್ಳಾರೆ ಸಿ.ಎ. ಬ್ಯಾಂಕ್ ನಿರ್ದೇಶಕರಾಗಿ, ಬೆಳ್ಳಾರೆ ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದದಲ್ಲದೆ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಶ್ರೀಮತಿ ಇಂದಿರಾ, ಪುತ್ರರಾದ ಮೈಸೂರಿನಲ್ಲಿ ವಕೀಲರಾಗಿರುವ ರಾಮರವೀಂದ್ರ ನೆಟ್ಟಾರು, ಸುಳ್ಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಸುಧಾಕರ ನೆಟ್ಟಾರು, ಮೈಸೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ಕೃಷಿಕರಾಗಿರುವ ಸತೀಶ್ ನೆಟ್ಟಾರು ಮತ್ತು ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಕೃಷ್ಣರಾಜ ನೆಟ್ಟಾರು ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.