ಕೆಯ್ಯೂರು : ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

0

ಕೆಯ್ಯೂರು ಗ್ರಾಮದ ಪಲ್ಲತಡ್ಕ ಮೋನಪ್ಪ ಪೂಜಾರಿಯವರ ಮಾಲಕತ್ವದ ಶ್ರೀ ಲಕ್ಷ್ಮಿ ಸಂಕೀರ್ಣದಲ್ಲಿ ಅಕ್ಟೋಬರ್ ೨೯ರಂದು ಬೆಳಿಗ್ಗೆ ಧನಲಕ್ಷ್ಮಿ ಪೂಜೆ, ಆಯುಧ ಪೂಜೆ, ವಾಹನ ಪೂಜೆ ನಡೆಯಿತು. ವೇದಮೂರ್ತಿ ಕೆ ಎಸ್ ನಿಡ್ವಣ್ಣಾಯರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಬಳಿಕ ಅವರ ಸ್ವಸ್ತಿಕ್ ನಿವಾಸದಲ್ಲಿ ಗಣಪತಿ ಹವನ, ಸತ್ಯನಾರಾಯಣ ದೇವರ ಪೂಜೆ ನಡೆಯಿತು.


ಮಾಲಕರ ತಂದೆ ಕಾಂತಪ್ಪ ಪೂಜಾರಿ, ತಾಯಿ ಲಕ್ಷ್ಮಿ, ಕುಟುಂಬ ಸದಸ್ಯರು, ಸಿಬ್ಬಂದಿ ವರ್ಗದವರು, ಸ್ಥಳೀಯರು ಉಪಸ್ಥಿತರಿದ್ದರು.