ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ವತಿಯಿಂದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ದಂಪತಿಗೆ ಸನ್ಮಾನ

0

ಸುಳ್ಯದ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ವತಿಯಿಂದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ದಂಪತಿಗಳನ್ನು ಜಾಲ್ಸೂರು ಗ್ರಾಮದ ವಿನೋಬನಗರದ ಅವರ ನಿವಾಸದಲ್ಲಿ ಅ.30ರಂದು ಸಂಜೆ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ನಾಯರ್, ಗೌರವ ಸಲಹೆಗಾರರಾದ ಡಾ. ಎಸ್. ರಂಗಯ್ಯ, ಕಾರ್ಯದರ್ಶಿ ಚೆನ್ನಕೇಶವ ಜಾಲ್ಸೂರು, ಉಪಾಧ್ಯಕ್ಷ ಕೆ.ಆರ್. ಗಿರಿಧರ, ನಿರ್ದೇಶಕರುಗಳಾದ ರಾಮಚಂದ್ರ ಆಗ್ರೋ, ಚಂದ್ರಹಾಸ ಕಡ್ಯದ, ದಿವಾಕರ ರೈ ಕುರಿಯ, ಎ.ಕೆ. ಉಮನಾಥ ಗೌಡ ಪಟೇಲ್ ಮನೆ ಜಾಲ್ಸೂರು, ಶಿವರಾಮ ರೈ ಕುರಿಯ, ಗಣೇಶ್ ರೈ ಕುರಿಯ, ಎಂ.ಎಸ್. ಭಟ್ ಬೆನಕ ಜಾಲ್ಸೂರು ಉಪಸ್ಥಿತರಿದ್ದರು.
ಉದ್ಯಮಿ ಸುಧಾಕರ ಕಾಮತ್ ಅವರು ಕೃತಜ್ಞತೆ ಸಲ್ಲಿಸಿದರು.