ಚೊಕ್ಕಾಡಿ ರಾಮಣ್ಣ ಗೌಡ ಪೂಜಾರಿಮನೆ ಯವರ ವೈಕುಂಠ ಸಮಾರಾಧನೆ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಮುನ್ನೂರು ಒಕ್ಕಲಿನ ಆರಾಧ್ಯ ದೈವ ಶ್ರೀ ಉಳ್ಳಾಕುಲು ದೈವದ ಪ್ರಧಾನ ಅರ್ಚಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶತಾಯುಷಿ ರಾಮಣ್ಣ ಗೌಡ ಪೂಜಾರಿ ಮನೆ ಯವರು ಅ.16 ರಂದು ನಿಧನರಾಗಿದ್ದು ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ವೈಕುಂಠ ಸಮಾರಾಧನೆಯು ಅ.31 ರಂದು ಕುಕ್ಕುಜಡ್ಕದ ಅಮರ ಸಹಕಾರ ಸದನ ಸಭಾಭವನದಲ್ಲಿ ‌ನಡೆಯಿತು.

ಅಳಿಯ ರಾಮಯ್ಯ ಮಾಸ್ತರ್ ಪಿಲಿಕಜೆ ಯವರು ದೀಪ ಪ್ರಜ್ವಲಿಸಿದರು.
ಸಾಮಾಜಿಕ ಧುರೀಣ, ಉದ್ಯಮಿಎಂ.ಬಿ.ಸದಾಶಿವ ರವರು ಮೃತರ ಜೀವನಗಾಥೆಯ ಕುರಿತು ಮಾತನಾಡಿ ಶ್ರದ್ಧಾಂಜಲಿ ಕೋರಿದರು.
ಅಳಿಯ ಬಾಲಕೃಷ್ಣ ಗೌಡ ಹಿರಿಯಡ್ಕ ರವರು ನುಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮೃತರ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.