ಸಮಸ್ತದ ಕೇಂದ್ರ ಅಧ್ಯಕ್ಷ ಖ್ಯಾತ ಸಯ್ಯದುಲ್ ಉಲಮಾ ಜಿಫ಼್ರಿ ಮುತ್ತುಕೋಯ ತಂಙಳ್ ಉದ್ಯಮಿ ಶಾಹುಲ್ ಹಮೀದ್ ಕುತ್ತಮೊಟ್ಟೆ ರವರ ಮನೆಗೆ ಭೇಟಿ, ವಿಶೇಷ ಪ್ರಾರ್ಥನೆ

0

ಇತ್ತೀಚಿಗೆ ಸುಳ್ಯದಲ್ಲಿ ೭ ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಮತ್ತು ೭ ಜೋಡಿ ವಧು ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದ ಉದ್ಯಮಿ ಶಾಹುಲ್ ಹಮೀದ್ ಕುತ್ತಮಟ್ಟೆ ರವರ ಮನೆಗೆ ಕೇಂದ್ರ ಸಮಸ್ತದ ಅಧ್ಯಕ್ಷ ರು ಖ್ಯಾತ ವಾಗ್ಮಿ ಮತ್ತು ಪಂಡಿತರಾದ ಸೈಯದುಲ್ ಉಲಮಾ ಜಿಫ್ರೀ ಮುತ್ತುಕೋಯ ತಂಙಳ್ರವರು ಇಂದು ಭೇಟಿ ನೀಡಿ ವಿಶೇಷ ಪ್ರಾರ್ಥನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಹುಲ್ ಹಮೀದ್ ರವರ ಕುಟುಂಬಸ್ಥರು ತಂಙಳ್ರವರನ್ನು ಗೌರವಿಸಿ ಸನ್ಮಾನಿಸಿದರು.

ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ,ಎಸ್ ವೈ ಎಸ್ ಸಂಘಟನೆಯ ಮುಖಂಡರಾದ ಹಾಜಿ ಇಬ್ರಾಹಿಂ ಕತ್ತರ್,ಸಹೋದರ ಶಾಫಿ ಕುತ್ತ ಮಟ್ಟೆ ಸೇರಿದಂತೆ ವಿವಿಧ ಗಣ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.