ದಬ್ಬಡ್ಕ – ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0


ದಬ್ಬಡ್ಕ – ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.

ಈ ಸಂದರ್ಭದಲ್ಲಿ S.D.M.C ಅಧ್ಯಕ್ಷರಾದ ಭವಾನಿ ಕುಮಾರ ಕೊಪ್ಪ, ಶಾಲಾ ಉಸ್ತುವಾರಿ ಸದಸ್ಯರಾದ ಗಿರೀಶ್ ಹೊಸೂರು , ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು .

ಮುಖ್ಯ ಶಿಕ್ಷಕಿ ಸುಜಾತ. ಬಿ.ರವರು ಸ್ವಾಗತಿಸಿದರು. ಪುಂಡರೀಕ ,ಅರಂಬೂರು ರವರು ಶಾಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೋಟ್ಸ್ ಪುಸ್ತಕಗಳನ್ನು ವಿತರಿಸಿದರು .

ಈ ಸಂದರ್ಭದಲ್ಲಿ ಭವಾನಿ ಕುಮಾರ ಕೊಪ್ಪ ಮಾತನಾಡಿ, ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಗಿರೀಶ ಹೊಸೂರು ಮಾತನಾಡಿ ಕನ್ನಡಭಿಮಾನನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಸಹ ಶಿಕ್ಷಕಿ ಹೇಮಲತಾ. ಎಮ್. ವಂದಿಸಿದರು.