ಚೆಂಬು ಶ್ರೀ ಭಗವಾನ್ ಸಂಘದಿಂದ ಸಂಪಾಜೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಚೆಂಬು ಶ್ರೀ ಭಗವಾನ್ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಪಾಜೆಯಲ್ಲಿ ಆಚರಿಸಲಾಯಿತು.
ಪಯಸ್ವಿನಿ ಸೊಸೈಟಿ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು ,ಭಗವಾನ್ ಸಂಘದ ಕಾರ್ಯದರ್ಶಿ ಹರ್ಷಿತ್ ನೆಲ್ಲಿಪುಣಿ ರವರು ರಾಜ್ಯೋತ್ಸವದ ಕುರಿತು ಶುಭಹಾರೈಸಿದರು‌.
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ ಆನಂದ ಮತ್ತು ಸಿಬ್ಬಂದಿಗಳು , ಎ.ಪಿ.ಎಂ.ಸಿ. ಮಾಜಿ ಸದಸ್ಯ ಕೆ.ಕೆ. ದೇವಪ್ಪ ಮತ್ತು ಭಗವಾನ್ ಸಂಘದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.