ಮರ್ಕಂಜ : ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರ – ಪೂರ್ವಭಾವಿ ಸಭೆ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮುಂಡೋಡಿ ಶಿರಾಡಿ ಯಾನೆ ರಾಜನ್ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.

ಡಿಸೆಂಬರ್ ಕೊನೆಯಲ್ಲಿ ಪುನರ್‌ ಪ್ರತಿಷ್ಠೆ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಘವ ಗೌಡ ಕಂಜಿಪಿಲಿಯವರ ಅಧ್ಯಕ್ಷತೆಯಲ್ಲಿ ಮುಂಡೋಡಿ ಸಾನಿಧ್ಯದ ವಠಾರದಲ್ಲಿ ನಡೆಯಿತು.‌

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಬಾಳಿಲ, ಅರಂತೋಡು ಕ್ಷೇತ್ರ ಜಿ.ಪಂ.‌ಮಾಜಿ ಸದಸ್ಯರು ಊರಿನ ಮುಖಂಡರಾದ ಹರೀಶ್ ಕಂಜಿಪಿಲಿ ಹಾಗೂ ಜಗನ್ಮೋಹನ ರೈ ರೆಂಜಾಳ, ಜಗನ್ನಾಥ ಕಾಯಾರ, ಕಮಾಲಕ್ಷ ಗೌಡ ಪುರ, ಕಿರಣ ಗುಡ್ಡನಮನೆ, ವಾಸುದೇವ ಗೌಡ ಪುರ ವೇದಿಕೆಯಲ್ಲಿದ್ದರು.‌

ಸಭೆಯಲ್ಲಿ ಧನ ಸಂಗ್ರಹದ ಬಗ್ಗೆ ಚರ್ಚಿಸಲಾಯಿತು. ಹಾಗೂ ವಿವಿಧ ಸಮಿತಿಗಳನ್ನು ಹಾಗೂ ಉಪಸಮಿತಿಗಳನ್ನು ರಚಿಸಲಾಯಿತು.