ನ.23: ಸುಳ್ಯ ರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆ ಹಾಗೂ ಭಕ್ತಿ ಗಾನಾಮೃತ

0

ಸುಳ್ಯ ಶ್ರೀ ರಾಮ ಪೇಟೆಯ ಶ್ರೀರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆಯು ನ.23 ರಂದು ನಡೆಯಲಿರುವುದು.

ನ. 23 ರಂದು ಪ್ರಾತ:ಕಾಲ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ಪರ್ಯಂತ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ
ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ಜರುಗಲಿರುವುದು.

ಪ್ರಾತಃಕಾಲ 6:30ಕ್ಕೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮೊಕ್ತೇಸರ ಜಿತೇಂದ್ರ ಎನ್.ಎ ರವರು ದೀಪ ಸ್ಥಾಪನೆ ಮಾಡಲಿರುವರು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಲಿದೆ. ಸಾಯಂಕಾಲ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ಹಾಗೂ ಕಾಸರಗೋಡು ಸಾಯಿಸಂಗೀತ್ ಮೆಲೋಡೀಸ್ ತಂಡದವರಿಂದ ಭಕ್ತಿ ಗಾನಾಮೃತ ವಿಶೇಷ ಕಾರ್ಯಕ್ರಮ ನಡೆಯಲಿದೆ.


ಏಕಾಹ ಭಜನೆಯ ಪ್ರಯುಕ್ತ ರಾತ್ರಿ ಸಮಯದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸೇವಾರೂಪದ ಉಲುಪೆಯ ಮೆರವಣಿಗೆಯು ಮಂದಿರದ ತನಕ ಸಾಗಿ ಬರಲಿದೆ. ನ.24 ರಂದು ಪ್ರಾತ:ಕಾಲ ಭಜನಾ ಕಾರ್ಯಕ್ರಮದ ಮಹಾ ಮಂಗಳಾರತಿಯಾಗಿ ದೀಪ ವಿಸರ್ಜನೆಯಾಗಲಿರುವುದು. ಬಳಿಕ ಆಗಮಿಸಿದ ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಲಿರುವುದು ಎಂದು ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ವಿವರ ನೀಡಿರುತ್ತಾರೆ.